ನಾನೇ ನನ್ನ ಬ್ಲಾಗನ್ನು ದುರ್ಲಕ್ಷಿಸಿದ್ದಾಗಲೂ ಕೆಲ ಸಹೃದಯರು ಈ ತಾಣಕ್ಕೆ ಬಂದು ನನ್ನ ಲೇಖನಗಳನ್ನು ಓದಿ ಅನ್ನಿಸಿಕೆಗಳನ್ನು ಬರೆದಿದ್ದಾರೆ. ನಿಮ್ಮಂಥವರಿಂದಲೇ ಮಳೆ ಬೆಳೆ.. ಎಂದೆಲ್ಲ ಹೇಳುವುದಿಲ್ಲ. ಆದರೂ ಈ ಪ್ರೋತ್ಸಾಹದ ಮಾತುಗಳು ನನ್ನನ್ನು ಬರೆಯಲು ಹಚ್ಚಬಹುದೇನೋ! ಎಲ್ಲರಿಗೂ ವಂದನೆಗಳು. ನಾನು ನನ್ನ ಬ್ಲಾಗಿನಿಂದ ದೂರವುಳಿಯಲು (ನಿಜವಾದ) ಕಾರಣಗಳಲ್ಲೊಂದೆಂದರೆ ನನ್ನ ಬಳಿ ತಾತ್ಕಾಲಿಕವಾಗಿ laptop ಇಲ್ಲದಿದ್ದುದು. ಅದಕ್ಕೆ ಕಾರಣಗಳು ಎರಡು: ನನ್ನ laptopಗೆ ವಯಸ್ಸಾಗಿ ಅದು ಗೂರಲು ಶುರು ಮಾಡಿದ್ದು; ಆದರೆ ಅದಕ್ಕೂ ಮುಖ್ಯವಾಗಿ, ನಾನು ಅಮೇರಿಕೆಗೆ ಹೊರಟದ್ದು. ಹೇಗೂ ಅಮೇರಿಕೆಗೆ ಹೋಗುತ್ತೇನೆ, ಈ ಹಳೆಯ laptop ಯಾಕೆ? ಅಲ್ಲಿಯೇ ಒಂದು ಥಳಥಳಿಸುವ ಹೊಸ laptop ತೊಗೊಳ್ಳಬಾರದೇಕೆ ಎಂದು ಆಲೋಚಿಸಿದೆ. ಅಂದುಕೊಂಡಂತೆಯೇ ಒಂದನ್ನು ಖರೀದಿಸಿಯೂ ಬಿಟ್ಟೆ. ಇಂದಿನ ಶುಭದಿನ — ಅಮೇರಿಕೆಗೆ ಬಂದ ಸರಿಯಾದ ೧೫ನೇ ದಿನ — ನನ್ನ ಹೊಸ laptop ಆಗಮಿಸಿದೆ; ಹೊಸದೊಂದು ಶುರುವಾತು ಎಂಬ ರಮ್ಯ ಕಲ್ಪನೆಯಿಂದ ಇದನ್ನು ಬರೆಯುತ್ತಿದ್ದೇನೆ. ಹೌದು, ಗೆಳೆಯರೆ! ನಾನೀಗ ಅಮೇರಿಕೆಯಲ್ಲಿದ್ದೇನೆ. ಇನ್ನಾರು ತಿಂಗಳು ನನ್ನ ಬಿಡಾರ ಇಲ್ಲಿಯೇ. ಇಲ್ಲಿನ universityಯೊಂದರಲ್ಲಿ ಅಲ್ಪ ಸ್ವಲ್ಪ ಸಂಶೋಧನೆ ಮಾಡುವ ಉದ್ದಿಶ್ಯವೂ ಇದೆ. ನೋಡೋಣ.
ಸಹೃದಯರೆ, ಕಾದು ನೋಡಿ. ನಾನು ಈ ಅಗಾಧ ಹಾಗೂ ವಿಚಿತ್ರ ದೇಶದ ಬಗೆಗಿನ ನನ್ನನುಭವಗಳನ್ನು ಪುಂಖಾನುಪುಂಖವಾಗಿ ಬರೆದು, ನಿಮ್ಮ ಇಷ್ಟು ದಿನಗಳ ಹತಾಶೆಯನ್ನು ಕಳೆಯಲೂಬಹುದು. ಅಥವಾ ನಿಮಗೆ ಜಿಗುಪ್ಸೆ ಹುಟ್ಟಿಸಲೂಬಹುದು. ಇಲ್ಲಿ ಬಂದ ಮೇಲೆ ಸುಮ್ಮನೇನೂ ಕುಳಿತಿಲ್ಲ. ಕಾರಂತರ “ಮರಳಿ ಮಣ್ಣಿಗೆ” ಓದಿದೆ. ಕಾರಂತರ ಹಲವು ಕೃತಿಗಳನ್ನು ಓದಿದ್ದರೂ ಏಕೋ ನಾನು ಇದನ್ನು ಓದಿರಲಿಲ್ಲ. ಓದಲು ಶುರು ಮಾಡುತ್ತಿದ್ದಂತೆಯೇ ಈ ಕೃತಿಯನ್ನು ನಾನು ಇಲ್ಲಿಯವರೆಗೆ ಓದಿಲ್ಲವೇ ಎನ್ನಿಸುವಂತಹ ಬರವಣಿಗೆ. ಅದರ ಬಗ್ಗೆ ಏನಾದರೂ ಬರೆಯಬೇಕೆಂದಿದೆ. ನೋಡುವ. ಹಾಗೆಯೇ ನನಗೆ ಇಷ್ಟವಾಗುವ ಕೆಲ ಬ್ಲಾಗುಗಳನ್ನು ಓದದೆಯೇ ಬಿಟ್ಟಿಲ್ಲ. ಆದರೆ universityಯ ನನ್ನ cubicleನಲ್ಲಿ ಕುಳಿತು ಅದೆಷ್ಟು ಪಠ್ಯೇತರ ಚಟುವಟಿಕೆ ನಡೆಸಲಾದೀತು? ಆದರೆ ಇನ್ನು ನಾನು ಸರ್ವತಂತ್ರ ಸ್ವತಂತ್ರ!
Chakora,
This time if you don’t keep your promise, we Kannada bloggers will fly to the US and confiscate your laptop!
Best of luck!
-Tina
ಟೀನಾ:
ನಿಮ್ಮ ಎಚ್ಚರಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿದ್ದೇನೆ!